ಪುರುಷೋತ್ತಮ ಯಶವಂತ ಚಿತ್ತಾಲರು ಇನ್ನಿಲ್ಲ. ಇಂದಿನ ಪ್ರಜಾವಣಿಯ ಮುಖಪುಟದಲ್ಲಿ ಅವರ ನಿರ್ಗಮನದ ಸುದ್ದಿಯನ್ನು ಓದಿ ಮನಸ್ಸು ನೆನಪಿನ ಸುರುಳಿ ಬಿಚ್ಚಿ ೨೦೦೬ನೆ ಇಸವಿಯ ಡಿಸೆಂಬರ್ ಮಾಹೆಯ ಒಂದು ಇಳಿಸಂಜೆಯ ಮೆಲುಕು ಹಾಕಲಾರಂಭಿಸಿತು. ಅಂದು ನಾನು ಇಂದು ಇನ್ನಿಲ್ಲವಾಗಿರುವ ಚಿತ್ತಾಲರನ್ನು ಅವರ ಬಾಂದ್ರಾ ನಿವಾಸದಲ್ಲಿ ಭೇಟಿಯಾಗಿದ್ದೆ. ಅವರ ಪ್ರೀತಿಯ ಸಮುದ್ರ ನೋಟವನ್ನು ಸವಿಯುತ್ತ ಅವರೆದಿರಾಗಿ ಕುರ್ಚಿಯಲ್ಲಿ ಕುಳಿತು ಸಾಹಿತ್ಯ, ತಾಂತ್ರಜ್ಞಾನದ ಬಗ್ಗೆ ಅವರ ವಿಚಾರಗಳನ್ನು ಕೇಳಿದ್ದೆ. ಅಂದು ಅವರು ಹೇಳಿದ ಒಂದು ಮಾತು ನನ್ನನ್ನು ಬಹಳವಾಗಿ ಪ್ರಭಾವಿಸಿತು. ದಕ್ಷಿಣ ಅಮೇರಿಕದ ಲೇಖಕನೊಬ್ಬ ಬರೆಯುವಾಗ/ಟೈಪಿಸುವಾಗ ತಪ್ಪಾದಾಗ ಅದು ಬರಿ ಕೈತಪ್ಪಲ್ಲ, ಮನಸ್ಸಿನ ಚಿಂತನೆಯಲ್ಲಿನ ತಪ್ಪು, ಎಂದು ಪರಿಭಾವಿಸಿ ಆ ಪುಟವನ್ನೇ ಹರಿದುಹಾಕಿ ಪುನಃ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದನು, ಆ ಬದ್ಧತೆ ನಮ್ಮ ಎಲ್ಲ ಚಿಂತನೆ, ಕೃತಿಯಲ್ಲಿರಬೇಕು ಎಂದಿದ್ದರು. ಅವರು ಅಂದು ನನ್ನಂತಹ ಕಿರಿಯನೊಂದಿಗೂ ತೋರಿದ ಮುಕ್ತ ಮನಸ್ಕತೆ, ಸೌಜನ್ಯವನ್ನು ನಾನೆಂದಿಗೂ ಮರೆಯಲಾರೆ. ಆತ್ಮದ ಕಲ್ಪನೆಯ ಬಗ್ಗೆ ಸಂಶಯಗಳನ್ನು ಹೊಂದಿರುವ ನಾನು ಚಿತ್ತಾಲರಂತಹ ಚೇತನ ನಾಡಿನೆಲ್ಲರನ್ನು ನೂರ್ಕಾಲ ಉದ್ದೀಪಿಸುತ್ತಿರಲಿ ಎಂದು ಹಾರೈಸ ಬಯಸುತ್ತೇನೆ.
Related Post
ಸಣ್ಣ ಕತೆ
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…